Math Demolished: ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ; ಅತ್ಯಾ*ರ ಆರೋಪಿ, ಕಪಟಿ ಸ್ವಾಮಿ ಮಠ ಸಂಪೂರ್ಣ ಧ್ವಂಸ!

ಚಿಕ್ಕೋಡಿ: ಅಪ್ರಾಪ್ತೆ ಮೇಲೆ ಬೆಳಗಾವಿಯ (Belagavi) ರಾಮಮಂದಿರ ಮಠದ‌ ಲೋಕೇಶ್ವರ ಸ್ವಾಮೀಜಿ ಅತ್ಯಾಚಾರ (Rape Case) ನಡೆಸಿದ್ದಾರೆ ಎನ್ನುವ ಆರೋಪದ ಮೇಲೆ ಜೈಲು ಸೇರಿದ್ದಾರೆ. ಈ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ಮೇಖಳಿ ಗ್ರಾಮದಲ್ಲಿನ ರಾಮ ಮಂದಿರದಲ್ಲಿ ಜೆಸಿಬಿಗಳು (JCB) ಸದ್ದುಮಾಡಿವೆ. ಕಪಟಿ ಸ್ವಾಮಿ ಲೊಕೇಶ್ವರ ಸ್ವಾಮೀಯ (Lokeshwara Swamiji) ಮಠವನ್ನು ಸಂಪೂರ್ಣ ಧ್ವಂಸ (Destroy) ಮಾಡಿದ್ದಾರೆ.

ಲೋಕೇಶ್ವರ ಸ್ವಾಮೀಜಿ ತನ್ನ ಜೊತೆಯೇ ಅಪ್ರಾಪ್ತೆಯನ್ನು ರಾಯಚೂರು, ಬಾಗಲಕೋಟೆಯ ಲಾಡ್ಜ್‌ಗಳಿಗೆ ಕರೆದೊಯ್ದು 2 ದಿನಗಳ ಕಾಲ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು, ಇದೀಗ ಸ್ವಾಮೀಜಿ ಜೈಲುಪಾಲಾಗಿದ್ದಾನೆ. ಈ ಬೆನ್ನಲ್ಲೃ ಇದೀಗ ತಾಲೂಕಾಡಳಿತ ಮೂರು ಜೆಸಿಬಿ ಬಳಸಿ ಬೆಳ್ಳಂಬೆಳಗ್ಗೆ ಮೇಖಳಿ ಗ್ರಾಮದಲ್ಲಿನ ರಾಮ ಮಂದಿರ ಮಠವನ್ನು ಸಂಪರ್ಣವಾಗಿ ನೆಲಸಮ ಮಾಡಿದ್ದಾರೆ.

 

CISF Head Constable Recruitment: CISFನಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಬಂಪರ್ ನೇಮಕಾತಿ! 12 ನೇ ತರಗತಿ ಪಾಸ್ ಆಗಿದ್ರೆ ಸಾಕು

ಕಪಟಿ ಸ್ವಾಮಿ ಲೊಕೇಶ್ವರ ಸ್ವಾಮೀಯ ಮಠವನ್ನು ತಾಲೂಕಾಡಳಿತ ಸಂಪೂರ್ಣವಾಗಿ ಧ್ವಂಸ ಮಾಡಿದೆ. ರಾಯಬಾಗ ತಹಶಿಲ್ದಾರರ ಮುಂಜೆ ನೇತೃತ್ವದಲ್ಲಿ ಮಠ ನೆಲಸಮ ಮಾಡಲಾಗಿದೆ. ಮೇಖಳಿ ಗ್ರಾಮದ ಸರ್ವೇ ನಂ. 225 ರಲ್ಲಿ ಸರ್ಕಾರಿ ಗೈರಾಣ ಜಮೀನಿನಲ್ಲಿ ಲೊಕೇಶ್ವರ ಸ್ವಾಮಿ ಮಠ ಸ್ಥಾಪನೆ ಮಾಡಿದ್ದರು. 8 ವರ್ಷಗಳ ಹಿಂದೆ 8 ಎಕರೆ ಜಾಗವನ್ನ ಅತಿಕ್ರಮಣ ಮಾಡಿಕೊಂಡು ಮಠ ನಿರ್ಮಾಣ ಮಾಡಲಾಗಿತ್ತು. ಇದೀಗ ಕಳ್ಳ ಸ್ವಾಮಿ ಜೈಲು ಪಾಲಾಗಿದ್ದು, ತಾಲೂಕಾಡಳಿತ ಭೇಟಿ ಕೊಟ್ಟು ಮಠವನ್ನು ಧ್ವಂಸ ಮಾಡಿದೆ.

ಅತ್ತ ಕಪಟಿ ಸ್ವಾಮಿ ಜೈಲು ಪಾಲು; ಇತ್ತ ಮಠ ಧ್ವಂಸ!
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿರುವ ಕಪಟಿ ಲೋಕೇಶ್ವರ ಸ್ವಾಮೀಜಿ ಮಠ ಸಂಪೂರ್ಣವಾಗಿ ನೆಲಸಮವಾಗಿದೆ. ಅತ್ತ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಹೊತ್ತು ಸ್ವಾಮೀಜಿ ಜೈಲು ಪಾಲಾಗಿದ್ದರೆ, ಇತ್ತ ತಾಲೂಕಾಧಿಕಾರಿಗಳು ಸ್ವಾಮಿ ಜೈಲು ಪಾಲಾಗುತ್ತಿದ್ದಂತೆ ಮಠವನ್ನೆ ನೆಲಸಮಗೊಳಿಸಿದ್ದಾರೆ.

Leave a Reply

Your email address will not be published. Required fields are marked *